ಬೆಳಗಾವಿ : ಗೋಕಾಕ್ ತಾಲೂಕಿನಲ್ಲಿ ಪಂಚಮಸಾಲಿಗಳಿಗೆ 2ಎ ಮಿಸಲಾತಿ ನೀಡುವಂತೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅದಿವೇಶನಕ್ಕೆ ಬಿಸಿ ಮುಟ್ಟಿಸಲು ರಾಜ್ಯಾದಂತ ಪಂಚಮಸಾಲಿಗಳು ಆಗಮಿಸಿ ಮುತ್ತಿಗೆ ಹಾಕುವ ವಿಚಾರಕ್ಕೆ ಸಂಬಂದಿಸಿದಂತೆ ಗೋಕಾಕದಲ್ಲಿ ಪಂಚಮಸಾಲಿ ಮತ್ತು ಪಂಚಮಸಾಲಿ ನ್ಯಾಯವಾದಿಗಳು ಪತ್ರಿಕಾಗೋಷ್ಟಿ ಹಮ್ಮಿಕೊಂಡಿದ್ದರು.
ನ್ಯಾಯವಾದಿಗಳ ಸಂಘದ ಹಾಲಿ ಅದ್ಯಕ್ಷ ಬಸವರಾಜ ಕೊಟಗಿ ಮಾತನಾಡಿ ರಾಜಕೀಯ ಶಾಶ್ವತ ಅಲ್ಲ,ಸಮಾಜ ಶಾಶ್ವತ ಬಸವರಾಜ ಯತ್ನಾಳ ,ಸಿಸಿ ಪಾಟೀಲ ಅವರು ಅವರ ಸರಕಾರವಿದ್ದಾಗ ಆಗಿನ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಪಂಚಮಸಾಲಿಗಳಿಗೆ 2ಎ ಮಿಸಲಾತಿ ನೀಡಲು ಒತ್ತಾಯಿಸಿದ್ದರು.
ಆದರೆ ಇವತ್ತು ಪಂಚಮಸಾಲಿಗಳ ಕೆಲ ರಾಜಕಾರಣಿಗಳ ಮುಖ್ಯಮಂತ್ರಿಗಳ ಅಮಿಷ ಇರಬಹುದು ಅಥವಾ ಅವರ ಇನ್ಯಾವದೋ ಒತ್ತಡಕ್ಕೆ ಮಣಿದು ನಮ್ಮ ಹೊರಾಟ ಹತ್ತಿಕ್ಕುವ ಕೆಲಸ ಮಾಡಬಾರದು, ಮೊದಲು ಹೊರಾಟದಲ್ಲಿ ಮಚೂಣಿಯಲ್ಲಿದ್ದ ವಿಜಯಾನಂದ ಕಾಶಪ್ಪನವರ ಅವರು ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಅವರ ಅಥವಾ ಅಮಿಷಕ್ಕೆ ಒಳಗಾಗಿ ಬೇರೆ ತರಹ ಹೇಳಿಕೆ ನೀಡಬಾರದು,ಬದಲಾಗಿ ಹೊರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು.
ಇನ್ನು ಮಾಜಿ ಅದ್ಯಕ್ಷ ಚನ್ನಪ್ಪ ಹುಕ್ಕೇರಿ ಮಾತನಾಡಿ ಪಂಚಮಸಾಲಿಗಳ ಬೇಡಿಕೆನೇರವೆರಿಸದೆ ಟ್ರ್ಯಾಕ್ಟರ್, ಕ್ರೂಸರಗಳನ್ನು ಜಿಲ್ಲಾಡಳಿತ ಮುಖಾಂತರ ನಿಷೇದಿಸಿ ಹೊರಾಟವನ್ನು ಹತ್ತಿಕ್ಕುವ ಕೆಲಸವನ್ನು ಮೊದಲಿನಿಂದಲೂ ಸರಕಾರಗಳು ಮಾಡುತ್ತಾ ಬಂದಿವೆ.
ಇವರು ಯಾವ ನಿಷೇಧಾ ಹೇರಿದರೂ ಸಹ ರಾಜ್ಯದ ಮೂಲೆ ಮೂಲೆಗಳಿಂದ ಬಸ್,ರೇಲ್ವೆ ಮುಖಾಂತರ ಪಂಚಮಸಾಲಿಗಳು ಆಗಮಿಸಿ ಸುವರ್ಣಸೌದಕ್ಕೆ ಮುತ್ತಿಗೆ ಹಾಕುತ್ತೆವೆ ಎಂದು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಚಂದನ ಗಿಡ್ಡನವರ ಇವರು ಜಿಲ್ಲಾಡಳಿತದವರು ನಮಗೆ ಅನುಮತಿ ನೀಡಿದ್ದಲ್ಲಿ ಶಾಂತಿಯುತವಾಗಿ ಹೊರಾಟ ಮಾಡುತ್ತೇವೆ.ಒಂದು ವೇಳೆ ನಮ್ಮ ಹೊರಾಟ ಹತ್ತಿಕ್ಕುವ ಕೆಲಸ ಮಾಡಿದ್ದಲ್ಲಿ ನಮ್ಮ ಹೊರಾಟ ಯಾವ ಸ್ವರೂಪ ಪಡೆದುಕೊಳ್ಳುತ್ತದೆಯೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಕೆಲವರು ಪಂಚಮಸಾಲಿಗಳ ಹೊರಾಟಗಾರರಿಗೆ ಸ್ವಾಗತದ ಬ್ಯಾನರ ಹಾಕುವ ಬದಲಾಗಿ ಸಚಿವರ,ಶಾಸಕರಿಗೆ ಸ್ವಾಗತ ಬ್ಯಾನರ ಹಾಕಿ ಬಕೇಟ ಹಿಡಿಯುವ ಕೆಲಸ ಮಾಡುತಿದ್ದಾರೆಂದರು.
ಈ ಸಂದರ್ಭದಲ್ಲಿ ಗೋಕಾಕ ತಾಲೂಕಿನ ಪಂಚಮಸಾಲಿಗಳ ನ್ಯಾಯವಾದಿಗಳು ಉಪಸ್ಥಿತರಿದ್ದರು.
ವರದಿ : ದಯಾನಂದ
.

