ಹೈದರಾಬಾದ್: ನಟ ಅಲ್ಲು ಅರ್ಜುನ್ ಕೇವಲ ಸಿನಿಮಾದಲ್ಲಿ ನಟನೆ ಮಾಟಿದ್ದಾರೆ. ಅವರು ಭಾರತಕ್ಕಾಗಿ ಯಾವುದೇ ಯುದ್ಧವನ್ನು ಗೆದ್ದಿಲ್ಲ ಎಂದು ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಕಿಡಿಕಾರಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತಾನಾಡಿದ ಸಿಎಂ, ಅಲ್ಲು ಅರ್ಜುನ್ ಲಾಭ ಮಾಡಿಕೊಂಡರೆ ನಮಗೇನೂ ಲಾಭ ಇಲ್ಲ. ಅವರೇನು ಗಡಿಗೆ ಹೋಗಿ ಯುದ್ಧ ಮಾಡಿ ಬಂದಿದ್ದಾರಾ? ಸಿನಿಮಾ ಎನ್ನೋದು ಹೀರೋಗಳಿಗೆ ಬ್ಯುಸಿನೆಸ್. ರಿಯಲ್ ಎಸ್ಟೇಟ್ ತರ ದುಡ್ಡು ಹಾಕಿ ದುಡ್ಡು ಗಳಿಸ್ತಾರೆ ಎಂದು ತಿಳಿದರು.
ಪ್ರೀಮಿಯರ್ ಶೋ ವೇಳೆ ಮಹಿಳೆಯ ಸಾವಿನ ಘಟನೆಯ ಹಿಂದೆ ಅಲ್ಲು ಅರ್ಜುನ್ ಅವರದ್ದೂ ತಪ್ಪಿದೆ. ಅವರು ಥಿಯೇಟರ್ನಲ್ಲಿ ಸಿನಿಮಾ ನೋಡಿ ಬರಬೇಕಿತ್ತು. ಆದರೆ ಅವರು ಗಾಡಿ ಮೇಲೆ ಹತ್ತಿ ಕುಣಿದಾಡಿ, ಚೀರಾಡಿದರು. ಈ ಮೂಲಕ ತಮ್ಮ ಫ್ಯಾನ್ಸ್ ಅನ್ನು ಪ್ರಚೋದಿಸಿದ್ದರು. ಇದರಿಂದಾಗಿಯೇ ದುರ್ಘಟನೆ ನಡೆದಿದೆ ಎಂದು ಹೇಳಿದರು.
ಅಲ್ಲು ಅರ್ಜುನ್ ಅವರ ಇತ್ತೀಚಿನ ಚಿತ್ರ ಪುಷ್ಪ 2: ದಿ ರೂಲ್ನ ಪ್ರೀಮಿಯರ್ ಈವೆಂಟ್ನಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಶುಕ್ರವಾರ ನಟನನ್ನು ಬಂಧಿಸಿದ್ದರು.
ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ನಂತರ ಟಾಲಿವುಡ್ ಸೂಪರ್ ಸ್ಟಾರ್ ಒಂದು ದಿನದ ನಂತರ ಶನಿವಾರ ಜೈಲಿನಿಂದ ಹೊರಬಂದಿದ್ದಾರೆ.

