ತಿಪಟೂರು :ತಿಪಟೂರಿನ ವೈದ್ಯ ಲೋಕದ ದಿಗ್ಗಜರಾದ ದೀನ ದಲಿತರ ಬಡವರ ಬಂಧು ತೆರೆಮೆರೆ ಯಲ್ಲಿ ಸಮಾಜ ಸೇವೆ ಮಾಡುತ್ತ ತಮಗರಿವೆಯಿಲ್ಲದೆ ತಮ್ಮ ಸೇವೆಯನ್ನು ಸಮಾಜಕ್ಕೆ ಮುಡಿಪಾಗಿಟ್ಟಿರುವ ಸರ್ಕಾರಿ ವೈದ್ಯರಾದ ಡಾ!ರಕ್ಷಿತ್ ಫಿಜಿಷಿಯಿನ್ ಆದ ಇವರು ತಮ್ಮ38 ನೇ ಹುಟ್ಟುಹಬ್ಬದ ಪ್ರಯುಕ್ತ ಯಶಸ್ವಿನಿ ವೃದ್ದಾಶ್ರಮದಲ್ಲಿ ಸರಳವಾಗಿ ವೃದ್ದಾಶ್ರಮದ ಹಿರಿಯರಿಗೆ ಬಟ್ಟೆ ಮತ್ತು ಹಣ್ಣನ್ನು ನೀಡುವುದರ ಮುಖಾಂತರ ಆಚರಿಸಿಕೊಂಡರು.
ಇದೆ ಸಂರ್ಭದಲ್ಲಿ ಮಾತನಾಡಿದ ಅವರು ಹಿರಿಯರನ್ನು ನಾವು ತುಂಬಾ ಗೌರವಯುತವಾಗಿ ಕಾಣಬೇಕು ಅವರೊಡನೆ ಸೌಜನ್ಯತೆಯಿಂದ ನಡೆದುಕೊಳ್ಳಬೇಕು, ಹಿರಿಯರು ನಮ್ಮ ಜೀವನದ ಮಾರ್ಗದರ್ಶಿಗಳು ನಮ್ಮ ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ಹೊತ್ತು ಹೊಯ್ಯ್ವವರು, ಹಿರಿಯರ ಅನುಭವವೇ ನಮ್ಮಗಳ ಜೀವನಕ್ಕೆ ಮಾರ್ಗಸೂಚಿ, ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ತಂದೆ ತಾಯಿಗಳಿಗೆ ಅಪಾರವಾದ ಗೌರವ ಮತ್ತು ಮಾನ್ಯತೆಯನ್ನು ಕೊಟ್ಟು ಅವರನ್ನು ನಮ್ಮ ನಮ್ಮ ಮನೆಗಳಲ್ಲಿ ನೋಡಿ ಕೊಳ್ಳೋಣ ಎಂದರು,
ಹಾಗೆ ಇದೇ ಸಂರ್ಭದಲ್ಲಿ ಕರ್ನಾಟಕ ಸಂಪಾದಕರು ಮತ್ತು ವಾರದಿಗಾರರ ಸಂಘದ ತಿಪಟೂರು ತಾಲೋಕ್ ಶಾಖೆಯ ಅಧ್ಯಕ್ಷರಾದ ಟಿ ರಾಜು ಬೆಣ್ಣೇನಹಳ್ಳಿ ಮಾತನಾಡಿ ವೈದ್ಯರಾದ ಡಾ!ರಕ್ಷಿತ್ ರವರು ತಿಪಟೂರು ತಾಲೋಕಿನ ಹೆಸರಾಂತ ವೈದ್ಯರೋಲ್ಲಬ್ಬರು ಇವರು ತುಂಬಾ ಸರಳ ಸಜ್ಜನಿಕೆಯುಳ್ಳವರು ಅವರು ಈ ಸಮಾಜದ ಕಟ್ಟ ಕಡೆಯ ರೋಗಿಗೂ ಸೇವೆ ದೊರೆಯುವಂತೆ ತಮ್ಮ ಸೇವೆಯನ್ನು ಮುಡಿಪಾಗಿಟ್ಟು ತಮ್ಮ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ ಅವರ ಈ ನಿಸ್ವಾರ್ಥ ಸೇವೆಯನ್ನು ಗುರ್ತಿಸಿ ಕರ್ನಾಟಕ ಸರ್ಕಾರ ಅವರಿಗೆ ಬೆಂಗಳೂರು ವಲಯದ “ಉತ್ತಮ ಪಿಜಿಷಯನ್ ” ಎಂಬ ಪುರಸ್ಕಾರ ವನ್ನು ನೀಡಿದೆ ಎಂದು ತಿಳಿಸಿದರು.
ನಂತರ ಯಶಸ್ವಿನಿ ವೃದ್ದಾಶ್ರಮ ದ ಶ್ರೀ ಮತಿ ಬಬಿತ ಮತ್ತು ಅವರ ತಂಡದಿಂದ ಡಾ!ರಕ್ಷಿತ್ ರವರಿಗೆ ಸನ್ಮಾನ ಮಾಡಿ ಗೌರವಿಸಿದರು ಈ ಕಾರ್ಯಕ್ರಮಕ್ಕೆ, ಟಿ ರಾಜು ಅಧ್ಯಕ್ಷರು ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ, ಅಧ್ಯಕ್ಷರು ಕ ದ ಸಂ ಸ ಘಟಕ ತಿಪಟೂರು, ಆಂಬುಲೆನ್ಸ್ ಚಾಲಕರಾದ ಶ್ರೀ ಅನಂತ್, ತಿಪಟೂರು ಕರ್ಣ ಮತ್ತು ವೈದ್ಯರಾದ ಡಾ!ಶ್ರೀ ಧರ್ ನೀಡಿರುವ ಉಚಿತ ವಾಹನ ಹಾಗೂ ನಿತ್ಯ ಅನ್ನಪೂರ್ಣ ದಾಸೋಹ ವಾಹನದ ಚಾಲಕರಾದ ಶ್ರೀ ಚೌಡಪ್ಪ, ನವೀನ್ ಜನರಲ್ ಹಾಸ್ಪಿಟಲ್,ಮದು ಆಂಬುಲೆನ್ಸ್ ಹಾಗೂ ಯಶಶ್ವಿನಿ ವೃದ್ದಾಶ್ರಮದ ಎಲ್ಲ ಹಿರಿಯರು ಪಾಲ್ಗೊಂಡಿದ್ದರು.

