ಬೆಂಗಳೂರು: ವೇದಿಕೆಯ (Stage) ಮೇಲೆ ನಿನ್ನೆ ಶಕುನಿ ಪಾತ್ರದಲ್ಲಿ ವೇದಿಕೆಗೆ ಬಂದ 72ರ ವಯಸ್ಸಿನ ಎನ್.ಮುನಿಕೆಂಪಣ್ಣ (Munikempanna) ಎಂಬವರು ವೇದಿಕೆ ಮೇಲೆ ಪಾತ್ರ ನಿರ್ವಹಿಸುತ್ತಲೇ ಕುಸಿದು ಬಿದಿದ್ದಾರೆ. ಈ ಘಟನೆ ಯಲಹಂಕದ (Yelhanka) ಸಾತನೂರು ಗ್ರಾಮದಲ್ಲಿ ನಡೆದಿದೆ.
ಮಧ್ಯರಾತ್ರಿಯವರೆಗೂ ಅದ್ಭುತವಾಗಿಯೇ ನಾಟಕ (Drama) ಪ್ರದರ್ಶನ ಮಾಡಿದ ಮುನಿಕೆಂಪಣ್ಣ, ಮಧ್ಯರಾತ್ರಿ 1 ಗಂಟೆಯ ವೇಳೆಗೆ ನಾಟಕ ಆಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇವರು ನಿವೃತ್ತ ಉಪನ್ಯಾಸಕರೂ (Professor) ಆಗಿದ್ದಾರೆ. ದೇವನಹಳ್ಳಿಯಲ್ಲಿ (Devanahalli) ನಡೆದ 28 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇದನ್ನೂ ಓದಿ: ಸಂತ್ರಸ್ತೆ ಅಪಹರಣ ಪ್ರಕರಣ: ಭವಾನಿ ರೇವಣ್ಣ ಸಂಬಂಧಿ ಬಂಧನ
ಮುನಿಕೆಂಪಣ್ಣ ಅವರಿಗೆ ಹೃದಯಾಘಾತವಾಗಿದ್ದು,(Heart Attack) ಅಪಾರ ಅಭಿಮಾನಿಗಳನ್ನು ಅಗಲಿದಿದ್ದಾರೆ. ಹುಟ್ಟೂರು ಅರದೇಶನಹಳ್ಳಿಯಲ್ಲಿ ಅಂತ್ಯ ಸಂಸ್ಕಾರದಕ್ಕೆ ಸಿದ್ದತೆ ಮಾಡಲಾಗಿದೆ. ಇದನ್ನೂ ಓದಿ: ಪೆನ್ಡ್ರೈವ್ ಪ್ರಜ್ವಲ್ ಪ್ರಕರಣ: ಮೇ 10 ರೊಳಗೆ ವಿಚರಣೆಗೆ ಹಾಜರಾಗಲು ಪ್ರಜ್ವಲ್ ನಿರ್ಧಾರ

