ಕುಣಿಗಲ್ : ಅಖಿಲ ಕರ್ನಾಟಕ ಭೂಮಾಪಕರ ಸಂಘದ ವತಿಯಿಂದ ತಾಲೂಕು ಕಚೇರಿ ಮುಂದೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಮತ್ತು ಪರವನಾಗಿ ಭೂಮಾಪಕರಿಗೆ ಸೇವಾ ಭದ್ರತೆ ನೀಡುವವರೆಗೂ ಅಳತೆ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ,ತಮ್ಮ ಸೇವೆ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಪರವಾನಗಿ ಭೂಮಾಪಕರು ಲಾಗಿನ್ ನಿಸ್ಕ್ರಿಯಗೊಳಿಸಿ, ಕೆಲಸ ಸ್ಥಗಿತಗೊಳಿಸಿ ಎಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು,,
ಈ ಸೇವೆಯಲ್ಲಿ ನಾವೆಲ್ಲರೂ ಸುಮಾರು 25 ವರ್ಷಗಳಿಂದ ಸರ್ಕಾರಿ ಪರಾವನಿಗೆ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದು ಸರ್ಕಾರದ ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ತಮಗೆ ಇದುವರೆಗೆ ಸಮಯಕ್ಕೆ ಸರಿಯಾಗಿ ಸರಿಯಾದ ವೇತನ ಆಗಿಲ್ಲ, ತಂತ್ರಾಂಶದಲ್ಲಿ ವಿಲೇ ಪ್ರಕರಣಗಳಿಗೆ ಸಂಭಾವನೆಯನ್ನು ತಾರತಮ್ಯ ಮಾಡಲಾಗಿದೆ, ಲಾಗಿನ್ ಅಲ್ಲದೆ ಇತರೆ ಕೆಲಸಗಳನ್ನು ವಹಿಸಲಾಗಿದೆ, ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ, ಇಲಾಖೆಯಿಂದ ಯಾವುದೇ ಸೌಲತ್ತುಗಳು ಇಲ್ಲ ಸರ್ಕಾರಿ ಭೂಮಾಪಕರಿಗೆ ಕೊಡುವ ಎಲ್ಲಾ ಸೌಲತ್ತುಗಳನ್ನು ನಮಗೂ ದೊರಕಿಸಬೇಕು, ಎಂದು ಕುಣಿಗಲ್ ತಾಲೂಕು ಭೂಮಾಪಕರ ಸಂಘದ ಅಧ್ಯಕ್ಷ ಜಯರಾಜು ಮಾತನಾಡಿದರು,,
ಯಾವುದೇ ರೀತಿಯ ಆರೋಗ್ಯದಲ್ಲಾಗಲಿ ರೈತರಿಂದಾಗಲಿ ಮತ್ತು ಅಪಘಾತದಿಂದಾಗಲಿ ನಮಗೆ ತೊಂದರೆಯಾದಾಗ ಮತ್ತು ಅಳತೆ ಸಮಯದಲ್ಲಿ ಪ್ರಕೃತಿ ವಿಕೋಪದಿಂದ ಯಾವುದೇ ತೊಂದರೆಗಳು ಉಂಟಾದಾಗ ನಮಗೆ ಯಾವುದೇ ರೀತಿಯ ಸೌಲಭ್ಯ ಇರುವುದಿಲ್ಲ, ಆದ್ದರಿಂದ ನಮ್ಮ ಕುಟುಂಬಕ್ಕೆ ಯಾವುದೇ ಸಹಾಯ ಇರುವುದಿಲ್ಲ ನಮಗೆ ಸರ್ಕಾರದ ಸೇವಾ ಭದ್ರತೆ ಮತ್ತು ಸರ್ಕಾರದಿಂದ ಸಕಲ ಸವಲತ್ತುಗಳನ್ನು ಒದಗಿಸಬೇಕು, ಪೋಡಿ ಮುಕ್ತ ಅಭಿಯಾನದಡಿಯಲ್ಲಿ ಕೆಲಸ ನಿರ್ವಹಿಸಿದ್ದು ಎರಡು ವರ್ಷಗಳಾದರೂ ಸಹ ಸಂಭಾವನೆ ಪಾವತಿ ಆಗಿರುವುದಿಲ್ಲ,
ಆದ್ದರಿಂದ ಜೀವನ ನಿರ್ವಹಣೆ ಮಾಡಲು ಬಹಳ ಕಷ್ಟಕರವಾಗಿದ್ದು ಹಾಗೂ ಅಪ್ಲೋಡ್ ವ್ಯವಸ್ಥೆಯಲ್ಲಿ ಇರುವುದನ್ನು ತೆಗೆದು ಸರಿಪಡಿಸಿಕೊಡಬೇಕು ನಮ್ಮ ಹುದ್ದೆಯನ್ನು ಖಾಯಂಗೊಳಿಸಬೇಕು ಎಂದು ತಾಲೂಕು ಭೂಮಾಪಕರ ಸಂಘದ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಿದ್ದಾರೆ,,
ಕುಣಿಗಲ್ ತಾಲೂಕು ಪರವನಾಗಿ ಭೂಮಾಪಕರ ಸಂಘ ಹಲವಾರು ಬೇಡಿಕೆಗಳಿಗಾಗಿ ಅಖಿಲ ಕರ್ನಾಟಕ ಭೂಮಾಪಕರ ಸಂಘ ರಾಜ್ಯದ್ಯಂತ ದಿನಾಂಕ 26,06,2025, ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು ನಮ್ಮ ತಾಲೂಕಿನಲ್ಲಿ ಎಲ್ಲಾ ಭೂಮಾಪಕರು ಅಳೆತೆಗೆ ಸಂಬಂಧಿಸಿದ ಎಲ್ಲಾ ರೀತಿಯ ಕೆಲಸಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿರುತ್ತದೆ, ಕರ್ನಾಟಕ ರಾಜ್ಯದಾದ್ಯಂತ 5,000 ನೌಕರರು ಇದ್ದು ನಮ್ಮ ಹೋರಾಟಕ್ಕೆ ನ್ಯಾಯ ಸಿಗದಿದ್ದರೆ ರಾಜ್ಯದಾದಂತ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು,,
ವರದಿ : ನರಸಿಂಹರಾಜು

