ರಿಯಲ್ ಎಸ್ಟೇಟ್ ದಂಧೆ “ಕುಬೇರ ಕುಮಾರ” ಪರಾರಿ
ಇನ್ಸ್ಪೆಕ್ಟರ್ ಒಬ್ಬ ಕುಬೇರನಾದಂತಹ ಸ್ಪೋಟಕ ಸ್ಟೋರಿ ಬಹಿರಂಗ
ಖಾಕಿ ಡ್ರೆಸ್ ಹಾಕಿಕೊಂಡು ಸಾಹುಕಾರನಾದ ಪುಣ್ಯಾತ್ಮ
,ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್” ಎ ವಿ ಕುಮಾರ್”
ಸಾಧಾರಣ ಇನ್ಸ್ಪೆಕ್ಟರ್ ಒಬ್ಬ ಕುಬೇರನಾದಂತಹ ಸ್ಪೋಟಕ ಸ್ಟೋರಿ ಬಹಿರಂಗವಾಗಿದ್ದು ಖಾಕಿ ಡ್ರೆಸ್ ಹಾಕಿಕೊಂಡು ಸಾಹುಕಾರನಾದ ಪುಣ್ಯಾತ್ಮ , ಜೀಪು ಬಿಟ್ಟು ಪರಾರಿಯಾದ ಘಟನೆ ನಡೆದಿದೆ,ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್” ಎ ವಿ ಕುಮಾರ್” ಕರ್ಮಕಾಂಡ ಖಾಕಿ ಡ್ರೆಸ್ ಹಾಕಿಕೊಂಡೆ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದ ಎನ್ನಲಾಗಿದೆ,
ಕಂಡವರ ಜಮೀನು ಸೈಟ್ ನುಂಗುತ್ತಿರು ಇನ್ಸ್ಪೆಕ್ಟರ್ ‘ಎ ವಿ ಕುಮಾರ್’ ಸೈನ್ ಹಾಕಲು ಒಪ್ಪದಿದ್ದರೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಿದ್ದ ಎಂದು ತಿಳಿದು ಬಂದಿದೆ,,ಕರ್ತವ್ಯವನ್ನು ಮರೆತು ರೌಡಿಗಳ ಜೊತೆ ಶಾಮೀಲಾಗಿ ಸಂಪೂರ್ಣ ರಿಯಲ್ ಎಸ್ಟೇಟ್ ನಂದೇಯಲ್ಲಿ ತೊಡಗಿ ಕೋಟಿ ಕೋಟಿ ಹಣವನ್ನು ಆಫೀಸಿಯಲ್ ಆಗಿ ಡೀಲ್ ಮಾಡ್ತಿದ್ದ ಎನ್ನಲಾಗಿದೆ, ಇ
ದು ಇತಿಹಾಸದಲ್ಲೇ ಮೊದಲ ಬಾರಿಗೆ ರೌಡಿಗಳ ಜೊತೆ ಪೊಲೀಸರು ಲಾಕ್ ,ಇವನು ಮಾಡಿರುವ ಆಸ್ತಿ ಎಷ್ಟು ಗೊತ್ತ ಎಂಬ ಪ್ರಶ್ನೆ ಎಲ್ಲರಲ್ಲೂ ಸಂಚಲನ ಮೂಡುತ್ತಿದೆ, ನಾಲ್ಕು ಕೋಟಿ ಬಿಲ್ಡಿಂಗ್ ಹೊಡೆಯಲು ಹೋಗಿ ಸಿಕ್ಕಿ ಹಾಕಿಕೊಂಡ ಎಂದು ತಿಳಿದುಬಂದಿದೆ, ರಾಜಕಾರಣಿಗಳನ್ನೇ ಮೀರಿಸುವ ಮಹಾಭ್ರಷ್ಟ, A V ಕುಮಾರ್, ಮೊದಲ ಬಾರಿಗೆ ಪೊಲೀಸರು ಮತ್ತು ರೌಡಿಗಳು ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿರುವುದು ಬಯಲಾಗಿದೆ,,
ಹುದ್ದೆಯನ್ನೇ ಬಳಸಿಕೊಂಡು ಇವನು ಮಾಡ್ತಿರೋ ಅಕ್ರಮವಾದ ಕೆಲಸಕ್ಕೆ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಆಗಿದೆ, ಇವನು ದಕ್ಷ ಪೊಲೀಸ್ ಎಂದು ಹೇಳಿಕೊಳ್ಳುತ್ತಿದ್ದ ಆದರೆ “ದಂದೆ” ಪೊಲೀಸ್ ಈತ ಪೋಲಿಸ್ ಇಲಾಖೆಗೆ ಕಳಂಕ ತರುವಂತಹ ಅಧಿಕಾರಿ ಭ್ರಷ್ಟ ಅಧಿಕಾರಿ ಎಂದು ಹೇಳಲಾಗುತ್ತಿದೆ,ಭೂ ರಾಕ್ಷಸ ಎ ವಿ ಕುಮಾರನ ರಿಯಲ್ ಎಸ್ಟೇಟ್ ದಂಧೆ ಬೀದಾಮಿ ಆಸ್ತಿ ಮಾಡೋದ್ರಲ್ಲಿ ಎತ್ತಿದ ಕೈ, ಹುದ್ದೆ ಅಡವಿಟ್ಟು ಮಾಡಿದ ಆಸ್ತಿ ಮಾಹಿತಿ ಕೇಳಿ ಸಾರ್ವಜನಿಕರು ಶಾಕ್ ಆಗಿದ್ದಾರೆ,
ಎಲ್ಲಾದರೂ ವಿವಾದಿತ ಭೂಮಿ ಕಂಡರೂ ಕಬಳಿಸೋಕೆ” ದಂಧೆ” ಕುಮಾರ ರೆಡಿ , ರೌಡಿಗಳ ಪಟಾಲಂ ಕಟ್ಟಿಕೊಂಡು ಭೂಮಿ ಹೊಡೆಯೋಕೆ ಸ್ಕೆಚ್ ಹಾಕುತ್ತಿದ್ದ, ಸಂಬಂಧಿಕರು ಗೆಳೆಯರ ಹೆಸರಲ್ಲಿ ಆಸ್ತಿ ಬರೆಸಿಕೊಳ್ಳುತ್ತಿದ್ದ,
ಬೇನಾಮಿ ಆಸ್ತಿಯ ಕುಬೇರ, ಬೆಂಗಳೂರಿನಲ್ಲೇ ನೂರು ಕೋಟಿಗೂ ಹೆಚ್ಚು ಆಸ್ತಿ ಮಾಡಿರೋ ಮಾಹಿತಿ ಸಿಕ್ಕಿದೆ, ಬಡಪಾಯಿಗಳನ್ನು ಹೆದರಿಸುವುದಕ್ಕೆ ರೌಡಿಗಳ ಟೀಮ್ ರೆಡಿ ಇರುತ್ತಿತ್ತು,,ನೆಲಮಂಗಲ ಬಳಿಯ ಹೊಸಪಾಳ್ಯದಲ್ಲಿರುವ ಅದ್ದೂರಿ ರೆಸಾರ್ಟ್ ಇರುವ ಮಾಹಿತಿ ಕೂಡ ಲಭ್ಯವಿದ್ದು, ಇವನು ಮಾಡ್ಕೊಂಡಿರೋ ಆಸ್ತಿ – ಪಾಸ್ತಿ ಒಂದ ಎರಡ ಮೂರ ನಾಲ್ಕು ಎಕರೆ ವಿಶಾಲವಾದ ಪ್ರದೇಶದಲ್ಲಿ ಇರುವ ಬೃಹತ್ ರೆಸಾರ್ಟ್ ಕಟ್ಟಿರೋ “ದಂಧೆ ಕುಮಾರ್”ತಂದೆ ವೀರಾಂಜಿನಪ್ಪ ಹೆಂಡತಿ ಮಂಜುಶ್ರೀ, ಸೋದರ ಬಸವರಾಜ್, ಹೆಸರಿನಲ್ಲಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿದ್ದಾಗ ಮಾಡಿದ್ದ ಬೇನಾಮಿ ಆಸ್ತಿಯಾಗಿದೆ,,
ರೆಸಾರ್ಟ್ ನ ಬಾಡಿಗೆ ದಿನಕ್ಕೆ 50,000 ಹಾಗೂ ಅಕ್ರಮ ಚಟುವಟಿಕೆ ಬೇರೆ ನಡೆಸ್ತಾ ಇದ್ದಾನೆ ಎಂದು ತಿಳಿದು ಬಂದಿದೆ, ವಿಧಾನಸಭೆ ಎಲೆಕ್ಷನ್ ವೇಳೆಯಲ್ಲಿ ರೆಸಾರ್ಟ್ ಮೇಲೆ ದಾಳಿಯಾಗಿದ್ದರೂ ಕೂಡ ಅದನ್ನು ಮುಚ್ಚಿ ಹಾಕಿದ್ದ ಎನ್ನಲಾಗಿದೆ, ಕೇವಲ 2 ವರೆ ವರ್ಷದಲ್ಲಿ ನೆಲಮಂಗಲವನ್ನು ನುಂಗಿ ನೀರು ಕುಡಿದಿದ್ದ ಭ್ರಷ್ಟ ಕುಮಾರ, ಕನಕಪುರ ರಸ್ತೆಯ ತಾತಗುಣಿ ಎಸ್ಟೇಟ್ ಬಳಿ 30 ಕೋಟಿಯ ಫಾರ್ಮ್ ಹೌಸ್ ಸುಮಾರು 50 60 ಆಸ್ತಿಗಳನ್ನು ಬೇನಾಮಿಯಾಗಿ ಮಾಡಿಕೊಂಡಿರುವ ಮಾಹಿತಿ ಸಿಕ್ಕಿದ್ದು ಒಬ್ಬ ಇನ್ಸ್ಪೆಕ್ಟರ್ ತನ್ನ ಸಂಬಳದಿಂದ ಇಷ್ಟೆಲ್ಲ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡುತ್ತಿದೆ,
ವರದಿ : ನರಸಿಂಹರಾಜು

