ಹೊಸಪೇಟೆ: ಜಾನಪದ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ (Majamma Jogati) ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದಾರೆ. ಮೂರು ವರ್ಷಗಳ ತಮ್ಮ ಅಧಿಕಾರಾವಧಿ ಮುಗಿಸಿದ ಬಳಿಕ ಅವರು ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಂಡಿದ್ದಾಗಿ ತಿಳಿಸಿದ್ದಾರೆ. ಪದ್ಮಶ್ರೀ ಮಂಜಮ್ಮ ಜೋಗತಿಯವರ ಜಾನಪದ ಅಕಾಡೆಮಿ ಅಧ್ಯಕ್ಷೆ ಅವಧಿಯು ಅಕ್ಟೋಬರ್ 14ಕ್ಕೆ ಪೂರ್ಣವಾಗಿದೆ. ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷ ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಖುಷಿ ಇದೆ. ಉಳಿದ ಅವಧಿಯನ್ನು ಮುಂದುವರಿಸಿದರೆ ಸಂತೋಷ. ಅಧಿಕಾರ ಇದ್ದರೂ, ಇಲ್ಲದಿದ್ದರೂ ಸಂತೋಷವಾಗಿರುತ್ತೇನೆ. ಬೇರೆ ಯಾರಾದರೂ ಬಂದು ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿದರು.
ಇದನ್ನೂ ಓದಿ:
Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ
ರಾಜಕೀಯಕ್ಕೆ ಬರಲ್ಲ ಎಂದ ಜೋಗತಿ
ಈ ಸಮಯ ಅಕಾಡೆಮಿಯಲ್ಲಿ ಮಾಡಿದ ಕೆಲಸ ಕಾರ್ಯ ಹಾಗೂ ತನಗೆ ಸಿಕ್ಕ ಬೆಂಬಲದ ಬಗ್ಗೆ ಭಾವುಕರಾದರು. ಜೊತೆಗೆ, ಜಾನಪದ ಅಕಾಡೆಮಿಯಿಂದ ನಿವೃತ್ತಿಯಾದ ನಂತರ ತಾನು ರಾಜಕೀಯಕ್ಕೆ ಬರುವ ಇಚ್ಛೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ:
Koragajja In Haveri: ಉತ್ತರ ಕರ್ನಾಟಕದಲ್ಲೂ ಕರಾವಳಿಯ ದೈವಾರಾಧನೆ ಶುರು!
ವೃತ್ತಿ ಮುಂದುವರೆಸುತ್ತೇನೆ ಎಂದ ಮಂಜಮ್ಮ!
ಜಾನಪದ ಅಕಾಡೆಮಿಯ ಕೆಲಸಗಳಿಂದಾಗಿ ಜಾನಪದ ಲೋಕದಿಂದ ದೂರ ಉಳಿದಿದ್ದರಿಂದ ಮತ್ತೆ ಮರಳಿ ಅದೇ ವೃತ್ತಿಗೆ ತೆರಳಬೇಕಿದೆ ಅಂತ ಪುನಃ ಭಾವುಕರಾದರು. “ಈಗ ಐದು ವರ್ಷದಿಂದ ಕುಣಿಯುತ್ತಿಲ್ಲ. ದೈಹಿಕವಾಗಿ ತೂಕ ಹೆಚ್ಚಾಗಿದೆ. ಯಲ್ಲಮ್ಮನ ಹಾಡು ನಾಟಕಗಳಿಗೆ ಕರೆದರೆ ಹೋಗುತ್ತೇನೆ. ವೃತ್ತಿ ಮುಂದುವರಿಸುತ್ತೇನೆ’’ ಎಂದು ಮಂಜಮ್ಮ ಜೋಗತಿ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

