ಅನ್ನ, ಅಕ್ಷರ, ಉದ್ಯೋಗ ಕಲ್ಪಿಸುವ ಸಂಕಲ್ಪದೊಂದಿಗೆ ಪ್ರಾರಂಭವಾದ ಒಕ್ಕಲಿಗ ಯುವ ಬ್ರಿಗೇಡ್ , ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಮಾರ್ಗದಶನದಲ್ಲಿ ಸುಮಾರು 25ಕ್ಕೂ ಹೆಚ್ಚು ದೇಶಗಳಲ್ಲಿ ಸೇವಾ ಕಾರ್ಯವನ್ನು ನಿರ್ವಹಿಸುತ್ತಿದೆ .
ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ನವೆಂಬರ್ 9 ರಂದು , ಸಂಜೆ 5.30 ಕ್ಕೆ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುಣ್ಯಸ್ಮರಣೆ ಹಾಗೂ ರಾಷ್ಟ್ರಕವಿ ಕುವೆಂಪುರವರ ಜಯಂತೋತ್ಸವ ಏರ್ಪಡಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದ್ದಾರೆ .
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸುವರು , ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸುವರು , ಹೈಕೋರ್ಟಿನ ನ್ಯಾಯಮೂರ್ತಿ ಹೆಚ್ . ಪಿ . ಸಂದೇಶ್ ರವರು ಅಧ್ಯಕ್ಷತೆಯನ್ನು ವಹಿಸುವರು .
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರಿನ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ಶ್ರೀ ಸೋಮೇಶ್ವರನಾಥ ಸ್ವಾಮಿಗಳು ಉಪಸ್ಥಿತಿಯಿರುವರು .
ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ , ರಾಜಶ್ರೀ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಡಿಸಿಎಂ ಡಾ. ಅಶ್ವಥ್ ನಾರಾಯಣ್, ಶಾಸಕರಾದ ಡಾ.ಮಂಥರ್ ಗೌಡ, ಕೆ. ಹರೀಶ್ ಗೌಡ , ರಾಜಸ್ತಾನದ ಐಜಿಪಿ ರಾಘವೇಂದ್ರ ಸುಹಾಸ್, ರಾಜ್ಯ ಕಾರ್ಮಿಕ ಆಯುಕ್ತ ಡಾ.ಹೆಚ್. ಎನ್ ಗೋಪಾಲಕೃಷ್ಣ , ದಕ್ಷಿಣ ಪ್ರಾಂತ್ಯ ಸಿಬ್ಬಂದಿ ನೇಮಕಾತಿ ಆಯೋಗದ ಪ್ರಾದೇಶಿಕ ನಿರ್ದೇಶಕ ಕೆ ನಾಗರಾಜ್ , ಆಂತರಿಕ ಭದ್ರತಾ ವಿಭಾಗದ ಎಸ್ಪಿ ಡಾ.ಎ. ನ್. ಪ್ರಕಾಶಗೌಡ ರವರು ಮುಖ್ಯ ಅತಿಥಿಗಳಾಗಿರುವವರು .
ಐಎಎಸ್ ಅಧಿಕಾರಿ ಡಾ.ನಾಗಾರ್ಜುನ್ ಬಿ ಗೌಡ,IRS ಅಧಿಕಾರಿ ಪಿ. ವಿ, ಭ್ಯರಪ್ಪ , AFHQ ಅಧಿಕಾರಿ ಭವ್ಯಶ್ರೀಯವರನ್ನು ಸನ್ಮಾನಿಸಲಾಗುವುದು. ಡಾ. ಕೆ.ಚಿದಾನಂದಗೌಡ ಹಾಗೂ ಶ್ರೀಮತಿ ತಾರಿಣಿ ಚಿದಾನಂದ ಅವರನ್ನ ವಿಶೇಷವಾಗಿ ಅಭಿನಂದಿಸಲಾಗುವುದು .
ಮೈಸೂರು ವಿ ವಿ ಕುಲಪತಿ ಪ್ರೊ. ಎನ್. ಕೆ . ಲೋಕನಾಥ್, ಕಾವೇರಿ ಹಾಸ್ಪಿಟಲ್ ಎಂಡಿ ಡಾ.ಚಂದ್ರಶೇಖರ್, ರಾಜ್ಯಉಪನೋಂದಣಾಧಿಕಾರಿಗಳ ನಿರ್ದೇಶಕ ವೆಂಕಟೇಶ್, ಆಂಕೋವಿಲ್ಲ್ ಕ್ಯಾನ್ಸರ್ ಹಾಸ್ಪಿಟಲ್ ನ ಎಂಡಿ ಡಾ. ಎಂ. ಆರ್. ಅನಿಲ್ ಕುಮಾರ್ , ಶ್ರೀರಂಗಪಟ್ಟಣದ ಸಮಾಜ ಸೇವಕ , ಉದ್ಯಮಿ ಸಚ್ಚಿದಾನಂದ ಅತಿಥಿಗಳಾಗಿರುವವರು .
ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆಯ ಕವೀಶ್ ಗೌಡ , ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್ , ಎಂ. ಆರ್ ಸತ್ಯನಾರಾಯಣ , ಸಿ ಕೆ ಮಹೇಂದ್ರ, ಮೈಮುಲ್ ಅಧ್ಯಕ್ಷ ಚೆಲುವರಾಜು , ಪವರ್ ಟಿವಿ ಇನ್ಪುಟ್ ಹೆಡ್ ಲೋಕೇಶ್ ಗೌಡ, NRI ಪ್ರತಿನಿಧಿಗಳಾಗಿ ಕತಾರ್ ಕನ್ನಡ ಸಂಘದ ಪ್ರಧಾನ ಸಲೆಹೆಗಾರರಾದ ಮಹೇಶ್ ಗೌಡ, ಕೆನಡಾ ದೇಶದ ಚಲನ ಚಿತ್ರ ವಿತರಕರಾದ ಕಾರ್ತಿಕ್ ಗೌಡ ಆಹ್ವಾನಿತರಾಗಿರುವರು .
ವಂದನೆಗಳೊಂದಿಗೆ ,
ನಂಜೇಗೌಡ ನಂಜುಂಡ
ಸಂಸ್ಥಾಪಕ ಅಧ್ಯಕ್ಷ-ಒಕ್ಕಲಿಗ ಯುವ ಬ್ರಿಗೇಡ್ ಹಾಗೂ NRI ಒಕ್ಕಲಿಗ ಬ್ರಿಗೇಡ್

