ಕುಣಿಗಲ್ : ಕುಣಿಗಲ್ ತಾಲೂಕು ಪಂಚಾಯಿತಿ ಮುಂಭಾಗ ತಾವರೆಕೆರೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಹುದ್ದೆಯನ್ನು ಸುಳ್ಳು ಮಾಹಿತಿ ನೀಡಿ ದಾಖಲಾತಿ ತಿರುಚಿ ಅಕ್ರಮವಾಗಿ ನೇಮಕಾತಿ ಪಡೆದಿರುವ ಹಾಗೂ ಕಂದಾಯ ಹಣವನ್ನು ಅಕ್ರಮವಾಗಿ ದುರುಪಯೋಗ ಮಾಡಿಕೊಂಡಿರುವ” ರಾಜೇಶ್ ಎಚ್ ಎಸ್ ” ( ಬಿಲ್ ಕಲೆಕ್ಟರ್ ) ಹುದ್ದೆಯನ್ನು ವಜಾಗೊಳಿಸಿ ಶಿಸ್ತು ಕ್ರಮ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸದೆ ರಕ್ಷಣೆ ಮಾಡುತ್ತಿರುವ ಕುಣಿಗಲ್ ಕಾರ್ಯ ನಿರ್ವಹಣಾಧಿಕಾರಿಯ ವಿರುದ್ಧ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ,,
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಬಿಲ್ಕಲ್ ಹುದ್ದೆಯನ್ನು (ರಾಜೇಶ್ ಎಚ್ ಎಸ್,ಬಿನ್ ಶಿವಣ್ಣ )ರವರನ್ನು ಹುದ್ದೆಯಿಂದ ವಜಾಗೊಳಿಸಿ ಅವರ ಮೇಲೆ ಕಾನೂನು ಶಿಸ್ತು ಕ್ರಮ ಜರುಗಿಸಿ, ಮತ್ತು ಅಂದಿನ ಅಕ್ರಮ ನೇಮಕಾತಿ ಪ್ರಕ್ರಿಯೆ ನಡೆಸಿರುವ ಅದರಲ್ಲಿ ಭಾಗಿಯಾಗಿರುವ ಅಧಿಕಾರಿಗಳೆಲ್ಲರ, ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದವರು ಒತ್ತಾಯಿಸಿದ್ದಾರೆ,,
ಒಂದೇ ಪಂಚಾಯಿತಿಯಲ್ಲಿ ಇಬ್ಬರು ಬಿಲ್ ಕಲೆಕ್ಟರ್ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರೆ ಇದಕ್ಕೆ ಸಂಪೂರ್ಣ ಇಲಾಖೆಯವರೇ ಶಾಮೀಲಾಗಿದ್ದಾರೆ ಎಂದು ತಿಳಿಸಿದರು, ಇವು ನಾರಾಯಣ್ ರವರು ಈ ಹಿಂದೆ ಎಷ್ಟು ಬಾರಿ ಮನವಿ ಕೊಟ್ಟರೂ ಸಹ ಸ್ಪಂದಿಸದೆ ಭ್ರಷ್ಟ ಅಧಿಕಾರಿಗಳ ಬೆಂಗಾವಲಾಗಿದ್ದಾರೆ ಎಂದು ಕಿಡಿಕಾರಿದರು,,
ಇದೇ ಸಂದರ್ಭದಲ್ಲಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ತಾಲೂಕು ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ, ಶ್ರೀನಿವಾಸ್ ರವರು ಇಲಾಖೆಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ, ಇವರು ಸರ್ಕಾರದ ಕೆಲಸ ನಿರ್ವಹಿಸುವುದಕ್ಕೆ, ಯಾವುದೇ ರೀತಿ ಅರ್ಹರಲ್ಲ, ಸರ್ಕಾರಿ ಕಂದಾಯದ ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು,,,
ಇಲ್ಕಲ್ ರಾಜೇಶ್ ಎಚ್ ಎಸ್ ಎಂಬುವರು ಸುಳ್ಳು ದಾಖಲಾತಿ ಸೃಷ್ಟಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡಿರುವುದು ತೀವ್ರ ಖಂಡನೀಯ, ಎಂದು ಬೇಸರ ವ್ಯಕ್ತಪಡಿಸಿದರು, ಸರ್ಕಾರಿ ಕೆಲಸ ದೇವರ ಕೆಲಸ, ಎಂದು ನಂಬಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವವರಿಗೂ ಕೂಡ ಇಂತಹ ಭ್ರಷ್ಟರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ, ಆದ್ದರಿಂದ ಈ ಮೋಸಗಾರರನ್ನು ಆದಷ್ಟು ಬೇಗ ಕರ್ತವ್ಯದಿಂದ ವಜಾ ಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾತನಾಡಿದರು,,
ವರದಿ : ನರಸಿಂಹರಾಜು

