ಮುಂಬೈ: ಕುಶಲಕರ್ಮಿಯೊಬ್ಬಗೆ ತಾವೇ ಸ್ವತಃ ಯುಪಿಐ ಮೂಲಕ ಹಣ ಪಾವತಿಸಿ ಭಗವಾನ್ ಜಗನ್ನಾಥನ ವಿಗ್ರಹವನ್ನು ಖರೀದಿಸಿದ್ದಾರೆ. ಮಹಾರಾಷ್ಟ್ರದ ವಾರ್ಧಾಗೆ ಭೇಟಿ ನೀಡಿರುವ ಮೋದಿ ಅವರು ಇಂದು ಕುಶಲಕರ್ಮಿಗಳ ಸ್ಟಾಲ್ಗೆ ಭೇಟಿ ನೀಡಿದ್ದರು. ಅಲ್ಲಿ ಜಗನ್ನಾಥನ ವಿಗ್ರಹವನ್ನು ಖರೀದಿ ಮಾಡಿದ್ದಾರೆ.
ವಿಡಿಯೋದಲ್ಲಿ ಮೋದಿ ಅವರು ವಿಗ್ರಹವನ್ನು ಖರೀದಿಸುವಾಗ ಕುಶಲಕರ್ಮಿಗಳ ಸಲಹೆಯನ್ನು ಆಲಿಸಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದ್ದು ಮೂರ್ತಿಯನ್ನು ಖರೀದಿಸಿ ಯುಪಿಐ ಮೂಲಕ ಪಾವತಿ ಮಾಡಿದ ಬಳಿಕ ಅವರು ಸ್ಟಾಲ್ನಿಂದ ಹೊರಡುವುದಕ್ಕೂ ಮುನ್ನ ಹಣ ಬಂದಿದೆಯಾ ಎಂದು ಕೇಳಿರುವುದು ಕಂಡುಬಂದಿದೆ.

