ತುರುವೇಕೆರೆ : ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ 47-74/75(ರಿ) ತುರುವೇಕೆರೆ ತಾಲೂಕು ಘಟಕ ವತಿಯಿಂದ ಜಿಲ್ಲಾ ಸಂಘಟನಾ ಸಂಚಾಲಕರಾದ ದಂಡಿನ ಶಿವರ ಕುಮಾರ್ ಹಾಗೂ ತಾಲೂಕು ಸಂಚಾಲಕರಾದ ಮಲ್ಲೂರು ತಿಮ್ಮೇಶ್ ಇವರ ನೇತೃತ್ವದಲ್ಲಿ ಪತ್ರಿಕಾ ಾಗೋಷ್ಠಿ ನಡೆಸಲಾಯಿತು,,
ಈ ವೇಳೆ ದಂಡಿನ ಶಿವರ ಕುಮಾರ್ ಮಾತನಾಡಿ ಆತ್ಮೀಯ ಎಲ್ಲಾ ದಲಿತ ಸಂಘಟನೆ ಸಮಿತಿ ಪದಾಧಿಕಾರಿಗಳೇ ದಿನಾಂಕ ಒಂಬತ್ತು ಆರು 2025ನೇ ಸೋಮವಾರ ಶಿವಮೊಗ್ಗದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪನವರ ಜನ್ಮದಿನ ಹಾಗೂ ಪದಾಧಿಕಾರಿಗಳ ಸಮಾವೇಶವನ್ನು ರಾಜ್ಯ ನೌಕರರ ಭಾವನೆಯಲ್ಲಿ ಹಮ್ಮಿಕೊಳ್ಳಲಾಗಿದೆ ತಪ್ಪದೆ ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಡಿಎಸ್ಎಸ್ ಮುಖಂಡರು ಪದಾಧಿಕಾರಿಗಳು ಹಾಗೂ ಸಮುದಾಯದ ಬಂಧುಗಳು ಎಲ್ಲಾ ವರ್ಗದ ಸಹಯೋಗಿಗಳು ಪಾಲ್ಗೊಳ್ಳಬೇಕೆಂದು ಮಾಧ್ಯಮದ ಮುಖ್ಯ ನ ಕಾರ್ಯಕ್ರಮಕ್ಕೆ ಆಹ್ವಾನಿಸಿದರು,,
ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಬೋರಯ್ಯ ಖಜಾಂಚಿ, ರಾಮಕೃಷ್ಣಯ್ಯ ಹಿರಿಯ ಮುಖಂಡರು, ಶಿವಣ್ಣ ಮುತ್ತುಗದ ಹಳ್ಳಿ, ನಂಜಪ್ಪ ಡಿ ಕಲ್ಕೆರೆ,ತಮ್ಮಯ್ಯ ಬಿ ಪುರ, ರೂಪ ರಂಗಸ್ವಾಮಿ, ಅನೇಕ ಮುಖಂಡರುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು,,
ವರದಿ : ನರಸಿಂಹರಾಜು

