ಬೆಳಗಾವಿ : ಪೌರ ನೌಕರರನ್ನು ಅರೆ ಸರ್ಕಾರಿ ನೌಕರರೆಂದು ಪರಿಗಣಿಸದ ಸರ್ಕಾರ…
ಪಂಚಾಯತ್ ರಾಜ್ ಇಲಾಖೆಯಡಿ ಕೆಲಸ ಮಾಡುವ ಪೌರ ನೌಕರರನ್ನು ಅರೆ ಸರ್ಕಾರಿ ನೌಕರರೆಂದು ಸರ್ಕಾರ ಘೋಷಣೆ ಮಾಡಿದಂತೆ ಸ್ಥಳೀಯ ಸಂಸ್ಥೆಗಳಲ್ಲಿಯೂ ಸೇವೆ ಸಲ್ಲಿಸುವ ಪೌರ ನೌಕರರನ್ನು ಸರ್ಕಾರಿ ನೌಕರರನ್ನು ಪರಿಗಣಿಸಬೇಕು. ಇಲ್ಲದಿದ್ದರೇ, ಮೇ. 27 ರಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸುವ ಎಚ್ಚರಿಕೆಯನ್ನು ಕರ್ನಾಟಕ ರಾಜ್ಯ ಪೌರ ನೌಕರರು ನೀಡಿದ್ದಾರೆ.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ನಮ್ಮ ನಡೆ…ಬೆಳಗಾವಿ ಕಡೆ ಎಂಬ ಪ್ರತಿಭಟನೆಯನ್ನು ನಡೆಸಲಾಯಿತು.
ಪಂಚಾಯತ್ ರಾಜ್ ಇಲಾಖೆಯಡಿ ಕೆಲಸ ಮಾಡುವ ಪೌರ ನೌಕರರನ್ನು ಅರೆ ಸರ್ಕಾರಿ ನೌಕರರೆಂದು ಸರ್ಕಾರ ಘೋಷಣೆ ಮಾಡಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೌರ ನೌಕರರಿಗೆ ಮಲತಾಯಿ ಧೋರಣೆ ತೋರುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು.
ಅಲ್ಲದೇ, ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ನೇರವಾಗಿ ವೇತನವನ್ನು ನೀಡಬೇಕು. ದಿನಗೂಲಿ ನೌಕರರನ್ನು ಸಕ್ರಮಮಾತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಮೇ 26 ರೊಳಗೆ ಈಡೇರಿಸದಿದ್ದರೇ, ಕೆಲಸ ಸ್ಥಗಿತಗೊಳಿಸಿ ಮುಷ್ಕರವನ್ನು ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಾಕಾರರಾದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಕಾಂಬಳೆ ನೀಡಿದರು.
ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದುಂಡಪ್ಪ ರಂಗಣ್ಣವರ, ಸುಖದೇವ ಶಿಂಧೆ, ಯಶವಂತ ಸಣ್ಣಕ್ಕಿ, ವಿವೇಕ ಬನ್ನೈ, ಶ್ರೀಧರ ಪಾಟೀಲ್, ಮಾರುತಿ ಬಳ್ಳಾರಿ, ಮಹೇಶ್ ಭಜಂತ್ರಿ, ಪ್ರವೀಣ ಗರದಾಳೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.
ವರದಿ : ದಯಾನಂದ

