ಪ್ರಾಮಾಣಿಕ ದಕ್ಷ ಅಧಿಕಾರಿಯದ ‘ಬಿ ದಯಾನಂದ’ ಐಪಿಎಸ್ ಅವರ ಅಮಾನತ್ತನ್ನು ಕೂಡಲೇ ಹಿಂಪಡೆಯುವಂತೆ ವಾಲ್ಮೀಕಿ ಸಮುದಾಯದ ಮುಖಂಡರುಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವುದರ ಮೂಲಕ ಪ್ರತಿಭಟನೆ ನಡೆಸಿದರು,,
ತುಮಕೂರು : ಇದೇ ಸಂದರ್ಭದಲ್ಲಿ ಜಿಲ್ಲಾ ವಾಲ್ಮೀಕಿ ಸಮುದಾಯದ ಮುಖಂಡ ಭಾನುಪ್ರಕಾಶ್ ಮಾತನಾಡಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಲ್ತುಳಿದಕ್ಕೆ 11ಮದಿ ಸಾವನ್ನಪ್ಪಿರುವ ಘಟನೆ ಸಂಭಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರದ ಬಿ ದಯಾನಂದ್ ಸೇರಿದಂತೆ ಅಧಿಕಾರಿಗಳನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಾರಿ ವಿರೋಧ ವ್ಯಕ್ತವಾಗಿ ಚರ್ಚೆಗೆ ಗ್ರಾಸವಾಗಿದೆ,
ತಮ್ಮ ವೈಫಲ್ಯ ಮರೆಮಾಚಲು ಅಧಿಕಾರಿಗಳನ್ನು ಅಮ್ಮನತ್ರ ಮಾಡಿರುವ ಕ್ರಮ ಸರಿಯಲ್ಲ ಎಂದು ವಾಲ್ಮೀಕಿ ಸಮುದಾಯದ ಮುಖಂಡರು ಸರ್ಕಾರದ ಸಿಎಂ,ಮತ್ತು ಡಿಸಿಎಂ, ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು,,
ಅದರಲ್ಲೂ ದಯಾನಂದ ಅವರ ಅಮಾನತು ಆದೇಶ ಹಿಂಪಡೆಯುವಂತೆ ಒತ್ತಾಯ ಮಾಡಿದ ವಾಲ್ಮೀಕಿ ಸಮುದಾಯದವರು, ಆಯುಕ್ತರಾಗಿದ್ದ ಅವರ ದಕ್ಷತೆ ಸಮಯಪ್ರಜ್ಞೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಾರ್ವಜನಿಕರು ದಯಾನಂದ್ ಅವರನ್ನು, ದಲಿತ ಜನಾಂಗಕ್ಕೆ ಸೇರಿದವರು ಎಂದು ರಾಜ್ಯ ಸರ್ಕಾರ ಜಾತಿಯತೆ ಮಾಡುತ್ತಿರುವುದು ಯಾವುದೇ ರೀತಿ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು,,
ಯಾವುದೇ ತಪ್ಪು ಮಾಡಿದ ಪೋಲಿಸ್ ಅಧಿಕಾರಿಗಳನ್ನು ವಿನಾಕಾರಣ ಅಮಾನತು ಮಾಡಿರುವುದು ಸರ್ಕಾರದ ಬೇಜವಾಬ್ದಾರಿ ಮತ್ತು ಅಸಮಾನ್ಯ ಧೋರಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು,,
ಈ ಸಂದರ್ಭದಲ್ಲಿ ಮಾರಣ್ಣ ಪಾಳೆಗಾರ್, ಶಂಕರ್ ಹಾಗಲವಾಡಿ, ರತ್ನಮ್ಮ ಕ್ಯಾತ್ಸಂದ್ರ, ವೆಂಕಟೇಶ್, ಭಾನುಪ್ರಕಾಶ್, ರವಿ, ರಘು ಬಟವಾಡಿ, ಹಿತೇಶ್, ಅನೇಕ ಮುಖಂಡರುಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಹಾಜರಿದ್ದರು,,

