ಮಹಾಕುಂಭನಗರ : ಮಹಾಕುಂಭ ಮೇಳಕ್ಕೆ ತೆರಳಿರುವ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಅಮೃತ ಸ್ನಾನದ ಅವಕಾಶ ಸಿಕ್ಕಿದೆ. ಮೌನಿ ಅಮವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಅನುಶ್ರೀ ಮಿಂದೆದ್ದಿದ್ದಾರೆ.
ಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ ಅದ್ಧೂರಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು, ದೇಶ, ವಿದೇಶದ ಮೂಲೆ ಮೂಲೆಯಿಂದ ಜನ ಆಗಮಿಸುತ್ತಿದ್ದಾರೆ. ಕನ್ನಡಿಗರ ದಂಡೆ ಅಲ್ಲಿ ಸೇರಿದೆ. ಇದೀಗ ಸ್ಯಾಂಡಲ್ ವುಡ್ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಾಜ್ ಬಿ ಶೆಟ್ಟಿಯವರು ಮಹಾಕುಂಭಕ್ಕೆ ಭೇಟಿ ನೀಡಿದ್ದು, ಅಲ್ಲಿನ ತ್ರಿವೇಣಿ ಸಂಗಮದ ಮುಂದೆ ನಿಂತಿರುವ ಒಂದಷ್ಟು ಫೋಟೊಗಳನ್ನು ಅವರು ಹಂಚಿಕೊಂಡಿದ್ದಾರೆ.
ಕನ್ನಡ ಖ್ಯಾತ ನಿರೂಪಕಿ ಅನುಶ್ರೀ ಅವರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದು, ಫೊಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಒಂದೇ ವಾಹಿನಿಯಲ್ಲಿಯೇ ವಿವಿಧ ಕಾರ್ಯಕ್ರಮಕ್ಕೆ ನಿರೂಪಕಿ ಆಗಿರೋದು ಗೊತ್ತೇ ಇದೆ. ಆದರೆ, ಈ ನಟಿ ಕನ್ನಡ ಸಿನಿಮಾರಂಗದ ಬಹು ಬೇಡಿಕೆಯ ಆ್ಯಂಕರ್ ಕೂಡ ಆಗಿದ್ದಾರೆ.
ಇವರು ಇಲ್ಲದೇ ದೊಡ್ಡ ಸ್ಟಾರ್ ಕಾರ್ಯಕ್ರಮಗಳೇ ಇಲ್ಲ. ಆ ಮಟ್ಟಿನ ಸಾಧನೆಯನ್ನ ಅನುಶ್ರೀ ಮಾಡಿದ್ದಾರೆ. ಆದರೀಗ ಅನುಶ್ರೀ ಬಗ್ಗೆ ಹೊಸ ಸುದ್ದಿಯೊಂದು ವೈರಲ್ ಆಗುತ್ತಿದೆ.
ಅದೇನೆಂದರೆ ಸಂಗಮದಲ್ಲಿ ಮಿಂದು… ಕಣ್ಣುಗಳು ನೆಂದು .. ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು … ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು !!! ಕೋಟಿ ಜನ ಸೇರೋ ಜಾಗ ..ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ದ್ರೆ ಈ ದೈವಿಕ ಅನುಭವ ಸಿಗ್ತಿರ್ಲಿಲ್ಲ. 29/01/2025 ಮೌನಿ ಅಮಾವಾಸ್ಯ . ಹರ ಹರ ಮಹದೇವ್ ಎಂದು ನಟಿ ಪೋಸ್ಟ್ ಬರೆದಿದ್ದಾರೆ.
ಅನುಶ್ರೀ ಅವರು ಜಾಕೆಟ್ ಧರಿಸಿಕೊಂಡು ಉದ್ದೆ ಕೂದಲನ್ನು ಬಿಟ್ಟು ನ್ಯಾಚುರಲ್ ಲುಕ್ನಲ್ಲಿ ಹಣೆಯಲ್ಲಿ ತಿಲಕವಿಟ್ಟಿರುವುದನ್ನು ಫೋಟೋದಲ್ಲಿ ನೀವು ಕಾಣಬಹುದು.

