ಕುಣಿಗಲ್:-ಮೊಬೈಲ್ ನಂಬರ್ ನೀಡಲು ನಿರಾಕರಿಸಿದ್ದ ಶ್ವೇತಾ ಎಂಬ ಮಹಿಳೆ ರೇಷ್ಮೆ ಇಲಾಖೆಯ ಹೊರಗುತ್ತಿಗೆ ನೌಕರರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ಕಬ್ಬಿಣದ ರಾಡ್ ನಿಂದ ಅಮಾನುಷವಾಗಿ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಕುಣಿಗಲ್ ತಾಲೂಕಿನ ಬಿಳಿ ದೇವಾಲಯ ಸರ್ಕಾರಿ ಪಿ 3 ರೇಷ್ಮೆ ಬಿತ್ತನೆ ಕೊಠಡಿಯ ಮುಂಭಾಗ ಮಂಗಳವಾರ ಹಾಡು ಹೋಗಲೇ ನಡೆದಿದೆ,
ಕುಣಿಗಲ್ ಪಟ್ಟಣದ ಕೆ ಆರ್ ಎಸ್ ಅಗ್ರಹಾರದ ಮಾಜಿ ಪುರಸಭೆ ಅಧ್ಯಕ್ಷರು ನಳಿನ ಭೈರಪ್ಪ ರವರ ರಸ್ತೆ ವಾಸಿಯಾದ ಶ್ವೇತ ಎಂ, ಅಲ್ಲೇಗೆ ಒಳಗಾದ ರೇಷ್ಮೆ ಹೊರಗುತ್ತಿಗೆ ಮಹಿಳಾ ನೌಕರರಾಗಿದ್ದಾರೆ,
ಏನಿದು ಘಟನೆ: ಶ್ವೇತಾ ಎಂಬುವರು ಎಂದಿನಂತೆ ಮಂಗಳವಾರ ಬೆಳಗ್ಗೆ 8:30ರ ಸಮಯದಲ್ಲಿ ಮನೆಯಿಂದ ಬಿಳಿ ದೇವಾಲಯದ ಸರ್ಕಾರಿ ಪಿ 3 ರೇಷ್ಮೆ ಬಿತ್ತನೆ ಕೊಠಡಿ ಕೇಂದ್ರಕ್ಕೆ ಕೆಲಸಕ್ಕೆ ಎಂದು ಹೋಗಿರುವ ಸಂದರ್ಭದಲ್ಲಿ ಇನ್ನು ಕಚೇರಿ ಬಾಗಿಲು ತೆಗೆಯದ ಕಾರಣವಾಗಿ ಶ್ವೇತ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಕತರ್ನಾಕ್ ಕದೀಮನೊಬ್ಬ ನಿಮ್ಮ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶ್ವೇತ ಮೇಡಂ ಮತ್ತು ವೆಂಕಟೇಶ್ ರವರ ಮೊಬೈಲ್ ನಂಬರ್ ಕೊಡಿ ಎಂದು ಕೇಳುತ್ತಾ ನಿಂತಿದ್ದಾನೆ, ಈ ವಿಚಾರವಾಗಿ ಮೂರು ನಾಲ್ಕು ದಿನಗಳು ಬಂದು ಮೊಬೈಲ್ ನಂಬರ್ ಕೇಳಿದ್ದ ಆತ ಶ್ವೇತ ಅವರು ಮೊಬೈಲ್ ನಂಬರ್ ಅನ್ನು ಆತನಿಗೆ ಕೊಡಲು ನಿರಾಕರಿಸಿದ್ದರು,
ರಾಡ್ ನಿಂದ ಬಡ ಮಹಿಳೆ ಮೇಲೆ ಹಲ್ಲೆ:
ಮಂಗಳವಾರ ಬಂದ ಕದೀಮನೊಬ್ಬ ಶ್ವೇತಾ ಮೇಡಂ ಅವರ ಮೊಬೈಲ್ ನಂಬರ್ ಕೊಡು ಎಂದು ಶ್ವೇತಾ ಎಂ ರವರನ್ನು ಕೇಳಿದ್ದಾನೆ,ಇಲ್ಲಿ ನೀನು ಏನು ಕೆಲಸ ಮಾಡುತ್ತಿದ್ದೀಯಾ ನಿನ್ನ ಮೊಬೈಲ್ ನಂಬರ್ ಆದರೂ ಕೊಡು ಎಂದು ಅವರನ್ನು ಕೇಳಿದ್ದಾನೆ, ಆತನ ದುರ್ವರ್ತನೆಯಿಂದ ಅನುಮಾನ ಗೊಂಡ ಶ್ವೇತಾ ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ್ದು, ಈ ವಿಚಾರವಾಗಿ ಕೋಪಗೊಂಡ ಅಪರಿಚಿತ ವ್ಯಕ್ತಿ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ, ತೀವ್ರವಾಗಿ ಗಾಯಗೊಂಡು ನೆಲಕ್ಕೆ ಉರುಳಿ ಬಿದ್ದ ಶ್ವೇತ ಎಂ ರವರು ನಂತರ ಎದ್ದು ಬಿಳಿ ದೇವಾಲಯ ಫಾರಂ ನಿಂದ ಆಟೋದಲ್ಲಿ ಬಂದು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಅವರ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ,,
ವರದಿ : ನರಸಿಂಹರಾಜು ಎಚ್

