ಪಟ್ನಾ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಡಿಯಲ್ಲಿ ಕ್ರಿಕೆಟ್ ಆಡುತ್ತಿದ್ದರು ಮತ್ತು ಭಾರತ ತಂಡದಲ್ಲಿರುವ ಅನೇಕರು ತಮ್ಮ ಬ್ಯಾಚ್ಮೇಟ್ಗಳೆಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ.
ರಾಷ್ಟ್ರೀಯ ಜನತಾ ದಳದ ನಾಯಕ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಆಗಿಂದಾಗೆ ಸದ್ದು ಮಾಡುತ್ತಿರುತ್ತಾರೆ.
ನಾನು ಒಬ್ಬ ಒಳ್ಳೆಯ ಕ್ರಿಕಟಿಗನಾಗಿದ್ದೆ. ಆದರೆ, ಗಾಯದ ಸಮಸ್ಯೆಯಿಂದ ನಾನು ಕ್ರಿಕೆಟ್ಅನ್ನು ತೊರೆಯಬೇಕಾಗಿ ಬಂತು. ನಾನು ವಿರಾಟ್ ಒಟ್ಟಿಗೆ ದೆಹಲಿ ಪರ ಆಡಿದ್ದೇವೆ. ನನ್ನ ವೃತ್ತಿಜೀವನದಲ್ಲಿ ವತ್ತಿಜೀವನದಲ್ಲಿ ಒಟ್ಟು 1 ಪ್ರಥಮ ದರ್ಜೆ, 2 ಲಿಸ್ಟ್ ಎ ಮತ್ತು 4 ಟಿ20 ಪಂದ್ಯಗಳನ್ನು ಎಂದು ತೇಜಸ್ವಿ ಯಾದವ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಬಗ್ಗೆ ಮಾತನಾಡಿರುವ ತೇಜಸ್ವಿ, ನಾನು ಕ್ರಿಕೆಟಿಗನಾಗಿದ್ದೆ ಮತ್ತು ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ವಿರಾಟ್ ಕೊಹ್ಲಿ ನನ್ನ ನಾಯಕತ್ವದಲ್ಲಿ ಆಡಿದ್ದಾರೆ.
ಪ್ರಸ್ತುತ ಭಾರತ ತಂಡದಲ್ಲಿರುವ ಅನೇಕ ಆಟಗಾರರು ನನ್ನ ಬ್ಯಾಚ್ಮೇಟ್ಗಳಾಗಿದ್ದರು. ಆದರೆ, ಇದರ ಬಗ್ಗೆ ಯಾರೂ ಕೂಡ ಯಾಕೆ ಮಾತನಾಡುವುದಿಲ್ಲ.ಇತ್ತ ತೇಜಸ್ವಿ ಯಾದವ್ ಅವರ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದ್ದು, ನೆಟ್ಟಿಗರು ಅವರನ್ನು ಹೀನಾಯವಾಗಿ ಟ್ರೋಲ್ ಮಾಡಿದ್ದಾರೆ.
ನಿಜ ಏನು..?
ಕ್ರೀಡೆಯನ್ನು ತೊರೆದು ರಾಜಕೀಯಕ್ಕೆ ಸೇರಿದ ಕ್ರಿಕೆಟಿಗರಲ್ಲಿ ತೇಜಸ್ವಿ ಯಾದವ್ ಕೂಡ ಒಬ್ಬರು. ಭಾರತೀಯ ರಾಜಕೀಯದಲ್ಲಿ ಜನಪ್ರಿಯ ಮುಖ, ತೇಜಸ್ವಿ ಬಿಹಾರದ ಮಾಜಿ ಉಪಮುಖ್ಯಮಂತ್ರಿ. ತೇಜಸ್ವಿ ಅವರು ಬಲಗೈ ಬ್ಯಾಟ್ಸ್ಮನ್ ಆಗಿದ್ದರು ಮತ್ತು ಅವರು ಜೂನಿಯರ್ ಕ್ರಿಕೆಟ್ನಲ್ಲಿ ದೆಹಲಿ ಕ್ರಿಕೆಟ್ ತಂಡಕ್ಕಾಗಿ ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದರು. ಅವರು ದೆಹಲಿಯಲ್ಲಿ ವಾಸಿಸುತ್ತಿದ್ದರು ಮತ್ತು ರಾಜಧಾನಿ ರಾಜ್ಯಕ್ಕಾಗಿ ಆಡುತ್ತಿದ್ದರು.
ಹೌದು, ತೇಜಸ್ವಿ ಮತ್ತು ವಿರಾಟ್ ಜೂನಿಯರ್ ಕ್ರಿಕೆಟ್ನಲ್ಲಿ ಡೆಲ್ಲಿ ಪರ ಅನೇಕ ಪಂದ್ಯಗಳನ್ನು ಒಟ್ಟಿಗೆ ಆಡಿದ್ದಾರೆ. 2003 ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ದೆಹಲಿ U-15 ಕ್ರಿಕೆಟ್ ತಂಡಕ್ಕೆ ವಿರಾಟ್ ಅವರ ನಾಯಕತ್ವದಲ್ಲಿ ತೇಜಸ್ವಿ ತಮ್ಮ ಜೂನಿಯರ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಆ ಪಂದ್ಯವನ್ನು ದೆಹಲಿಯು ಇನ್ನಿಂಗ್ಸ್ ಮತ್ತು 55 ರನ್ಗಳಿಂದ ಗೆದ್ದಿತು.
ತೇಜಸ್ವಿ ಮುಂದಿನ ವರ್ಷಗಳಲ್ಲಿ ದೆಹಲಿ ಕ್ರಿಕೆಟ್ ತಂಡವನ್ನು ಮುನ್ನಡೆಸಿದರು. ಅವರು 2008 ರವರೆಗೆ ದೆಹಲಿಗಾಗಿ ಆಡುವುದನ್ನು ಮುಂದುವರೆಸಿದರು ಮತ್ತು ಅದೇ ವರ್ಷದ ಅಕ್ಟೋಬರ್ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ವಿರಾಟ್ 2007 ರಲ್ಲಿ ಜೂನಿಯರ್ ಕ್ರಿಕೆಟ್ನಲ್ಲಿ ದೆಹಲಿ ಪರ ಕೊನೆಯ ಪಂದ್ಯವನ್ನು ಆಡಿದ್ದರು.

