ಧಾರವಾಡ: ಎಂಸಿಎ ವಿದ್ಯಾರ್ಥಿ ನೇಹಾ (Neha) ಹತ್ಯೆಯಾಗಿ ಇಂದಿಗೆ ನಾಲ್ಕು ದಿನಗಳಾಗಿದ್ದು, ಇಡಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಹತ್ಯೆ ಖಂಡಿಸಿ ಧಾರವಾಡ್ (Dharwad) ಬಂದ್ಗೆ (Bandh) ಅಂಜುಮಾನ್ ಇಸ್ಲಾಂ ಸಂಸ್ಥೆಯಿಂದ ಕರೆ ನೀಡಿದೆ.
ಕಾಲೇಜಿಗೆ ಹೋದ ಮಗಳು ಹೆಣವಾಇ ಮನೆಗೆ ಬಂದಿದ್ದು ಇಡೀ ಕರುನಾಡಿನ ಜನರ ಮನಸ್ಸು ಒಡೆಯುವಂತೆ ಮಾಡಿದೆ. ಇದನ್ನೂ ಓದಿ: ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ: ರಿಷಬ್ ಶೆಟ್ಟಿ
ಅತ್ಯಂತ ಭೀಕರವಾಗಿ ನೇಹಾ ಕೋಲೆ ನಡೆದಿದ್ದು, ಇಡೀ ಕರುನಾಡೇ ಖಂಡಿಸುತ್ತಿದೆ. ಕೋಲೆಗಾರ ಫಯಾಜ್ ವಿರುದ್ಧ ಎಲ್ಲೆಡೆ ಆಕ್ರೋಶದ ಜ್ವಾಲೆ ಧಗಧಗಿಸಿದೆ. ಇದೀಗ ಮುಸ್ಲಿಂ ಬಾಂಧವರು ಕೂಡ ನೇಹಾ ಪರಬವಾಗಿ ನ್ಯಾಯಕ್ಕಾಗಿ ಆಗ್ರಹಿಸ್ತಿದ್ದಾರೆ. ಅಂಜುಮಾನ್ ಇಸ್ಲಾಂ ಸಂಸ್ಥೆ, ಧಾರವಾಡ ಬಂದ್ಗೆ ಕರೆ ಕೊಟ್ಟಿದೆ. ಆದರಂತೆ ಇಂದು ಅರ್ಧ ದಿನ ಧಾರವಾಡ ಬಂದ್ ಮಾಡಲಾಗುತ್ತಿದೆ. ಮುಸ್ಲಿಂ ಅಮುದಾಯದ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಕ್ಲೋಸ್ ಆಗಿರಲ್ಲಿವೆ. ಇದನ್ನೂ ಓದಿ: ಭಾರತ ವಿರೋಧಿ ಮುಯಿಝುಗೆ ಮಾಲ್ಡೀವ್ಸ್ ಚುನಾವಣೆಯಲ್ಲಿ ಭರ್ಜರಿ ಗೆಲುವು

