ಕುಣಿಗಲ್ :- ಪಟ್ಟಣದ ಪುರಸಭೆಯಲ್ಲಿ 20.25 ವರ್ಷಗಳಿಂದ ನೀರು ಸರಬರಾಜು ಹೊರಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸಿದ್ದೇವೆ, ನಮ್ಮ ಹುದ್ದೆಯನ್ನು ರಾಜ್ಯ ಸರ್ಕಾರ ಖಾಯಂಗಗೊಳಿಸಬೇಕು, ಎಂದು ತಾಲೂಕು ದಂಡಾಧಿಕಾರಿ ರಶ್ಮಿ ಯು ರವರಿಗೆ ಮನವಿ ಪತ್ರ ಸಲ್ಲಿಸಿದರು,,
ಪುರಸಭೆ ಪಟ್ಟಣ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ನೀರು ಸರಬರಾಜು ನೌಕರರನ್ನು ದೂಡಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಿರುವುದು ಯಾವುದೇ ರೀತಿ ಸರಿಯಲ್ಲ, ಎಂದು ನೌಕರರು ಬೇಸರ ವ್ಯಕ್ತಪಡಿಸಿದರು,
ನಮಗೆ ಇದುವರೆಗೂ ಯಾವುದೇ ರೀತಿಯ ಸೇವಾ ಭದ್ರತೆಯು ಕೂಡ ದೊರೆತಿಲ್ಲ, ಇದರಿಂದ ನಮ್ಮ ಕುಟುಂಬಗಳು ಬೀದಿ ಪಾಲಾಗುವ ಪರಿಸ್ಥಿತಿಯಲ್ಲಿ ನಿಂತಿವೆ, ನಿತ್ಯ ಜೀವನದ ಅತಿ ಮುಖ್ಯವಾಗಿ ಸಾರ್ವಜನಿಕರಿಗೆ ಅತ್ಯಾವಶ್ಯಕವಾಗಿರುವಂತಹ ನೀರು ಸರಬರಾಜು ಸೇವೆಯನ್ನು ಹಬ್ಬ ಹರಿ ದಿನಗಳು ಎನ್ನದೆ ವಿಶ್ರಾಂತಿಯನ್ನು ಪಡೆಯದೆ ನಾವುಗಳು ನೀರು ಸರಬರಾಜು ಮಾಡಿಕೊಂಡು ಬಂದಿರುತ್ತೇವೆ ಎಂದು ತಿಳಿಸಿದರು,,
20 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಸರ್ಕಾರದಿಂದ ಯಾವುದೇ ರೀತಿಯ ನೇರ ನೇಮಕಾತಿ ಹಾಗೂ ನೇರ ಪಾವತಿಯನ್ನು ಸಹ ಕೊಡದೆ ಇರುವುದು ತುಂಬಾ ವಿಪರ್ಯಾಸವಾಗಿದೆ ಎಂದರು,,
ನಾವುಗಳು ಸಾರ್ವಜನಿಕ ಹಿತ ದೃಷ್ಟಿಯಿಂದ ಯಾವುದೇ ಮುಷ್ಕರದಲ್ಲಿ ಭಾಗಿಯಾಗದೆ ಸಮರ್ಪಕವಾಗಿ ನೀರು ಸರಬರಾಜು ಸೇವೆಯಲ್ಲಿ ತೊಡಗಿದ್ದೇವೆ, ನಮ್ಮಗಳ ಸೇವೆಯನ್ನು ಗುರುತಿಸಿ ಒಂದು ತಿಂಗಳ ಒಳಗಾಗಿ ನೇರಪಾವತಿ ಅಡಿಯಲ್ಲಿ ಖಾಯಂ ಗೊಳಿಸಬೇಕು ಎಂದು ಮಾತನಾಡಿದರು,,
ಒಂದು ತಿಂಗಳ ಒಳಗಾಗಿ ನಮಗೆ ನೇರ ಪಾವತಿಯನ್ನು ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ್ಯಂತ ನೀರು ಸರಬರಾಜು ಸೇವೆಯನ್ನು ಸ್ಥಗಿತಗೊಳಿಸಿ ನಮ್ಮ ಎಲ್ಲಾ ನೌಕರರು ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಸೂಚಿಸಿದರು,,
ಕುಡಿಯುವ ನೀರು ಎಲ್ಲರಿಗೂ ಅತ್ಯಮೂಲ್ಯವಾಗಿದೆ,ನಿಮ್ಮ ಎಲ್ಲಾ ಕಷ್ಟ ಸುಖದಲ್ಲಿ ನಾವುಗಳು ಸಹ ಭಾಗಿಯಾಗಿದ್ದೇವೆ,ಆದಷ್ಟು ಬೇಗ ನಿಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸುವ ಕಾರ್ಯ ಮಾಡುತ್ತೇನೆ, ನಿಮ್ಮ ಖಾಯಂ ಹುದ್ದೆಗೆ ನಾವುಗಳು ಸಹ ಜೊತೆಯಾಗಿ ನಿಂತಿರುತ್ತೇವೆ,ಎಂದು ಅತ್ಯುತ್ತಮ ತಹಸೀಲ್ದಾರ್” ರಶ್ಮಿ ಯು” ರವರು ನೀರು ಸರಬರಾಜು ನೌಕರರಿಗೆ ತಿಳಿಸಿದರು,,
ವರದಿ : ನರಸಿಂಹರಾಜು

