ಬೆಂಗಳೂರು: ದೇಶಾದ್ಯಂತ 2 ನೇ ಹಂತದ ಚುನಾವಣೆ ಬಾಗವಾಗಿ ದಕ್ಷಿಣ ಕರ್ನಾಟಕದ (Karnataka) ಮೂರು ಮೀಸಲು ಕ್ಷೇತ್ರ ಸೇರಿ 14 ಲೋಕಸಭೆ ಕ್ಷೇತ್ರಗಳಿಗೆ ಇಂದು ಮತದಾನ ಆರಂಭವಾಗಿದೆ.
ಸದ್ಯ ರಾಜ್ಯದಲ್ಲಿ ಮೂರು (Three) ಪಕ್ಷಗಳು ಫ್ರಧಾನವಾಗಿದ್ದರೂ, ಜೆಡಿಎಸ್- ಬಿಜೆಪಿ (JDS-BJP) ಮೈತ್ರಿ ಮಾಡಿಕೊಂಡಿರುವ ಕಾರಣ ಕಾಂಗ್ರೆಸ್ (Congress) ಜೊತೆಗೆ ನೇರಾನೇರಾ ದ್ವಿಮುಖ ಪೈಪೋಟಿ ಏರ್ಪಟ್ಟಿದೆ. 14 ರಲ್ಲಿ ಮೂರು ಕಡೆ ಜೆಡಿಎಸ್, 11 ಕಡೆ ಬಿಜೆಪಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲೂ ಕನಕ್ಕಿಳಿದಿದೆ.

ಈ ಬಾರಿ ವಿಶೇಷ ಎಂದರೆ ಬಿಜೆಪಿ 8 ಸಿಟ್ಟಿಂಗ್ ಎಂಪಿಗಳಿಗೆ ಟಿಕೆಟ್ ನಿರಾಕರಿಸಿದೆ. ಸದ್ಯ ನಾಲ್ಕು ಕಡೆ ಮಾತ್ರ ಹಾಲಿ ಎಂಪಿಗಳು ಅದೃಷ್ಟ ಪರೀಕ್ಷೆ ಮಾಡಿಕೊಳುತ್ತಿದ್ದಾರೆ. ಪಕ್ಷದ ಉಳಿವಿಗಾಗಿ ಖುದ್ದು ಮಾಜಿ ಸೆಎಂ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರ ಕ್ಷೇತ್ರ ಬದಲಾಗಿದೆ. ಇಬ್ಬರು ಮಹಿಳೆಯರು, ರಾಜವಂಶಸ್ಥರೋಬ್ಬರು ಕೂಡ ಕಣದಲ್ಲಿದ್ದಾರೆ.

