ಕೊಡಗು: SSLC ವಿದ್ಯಾರ್ಥಿನಿಯನ್ನು ಕೊಂದು ಆರೋಪಿ ರುಂಡ-ಮುಂಡ ಬೇರ್ಪಡಿಸಿ ಪರಾರಿಯಾಗಿದ್ದ, ಇದೀಗ ಮೀನಾಳ ರುಂಡ ಪತ್ತೆಯಾಗಿದೆ.
ನಿಶ್ಚಿತಾರ್ಥ (Engagement) ಮಾಡಿಕೊಂಡು ವರನ ಕೈಯಾರೆ ಸಾವನ್ನಪ್ಪಿದ ಮೀನಾಳ ರುಂಡ ಕೊನೆಗೂ ಪತ್ತೆಯಾಗಿದೆ. ಆರೋಪಿ ಪ್ರಕಾಶನನ್ನು ಬಂಧಿಸಿ ಪೊಲೀಶರು ಸ್ಥಳ ಮಹಜರು ಮಾಡಿದಾಗ ಮೀನಾಳ ತಲೆ ಎಸೆದ ಜಾಗವನ್ನು ತೋರಿಸಿದ್ದಾನೆ.
ಮೀನಾಳ ತಲೆ ಘಟನಾ ಸ್ಥಳದಿಂದ 50ಮೀ. ದೂರದಲ್ಲಿ ಪತ್ತೆಯಾಗಿದೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು, ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಕ್ರಿಕೆಟ್ ಬ್ಯಾನರ್ ಕಟ್ಟುವಗ ದುರಂತ- ಓರ್ವ ಸಾವು, ಮುಗಿಲು ಮುಟ್ಟಿದ ಆಕ್ರಂದನ
ಪ್ರಕರಣವೇನು?
ಗುರುವಾರ ಸಂಜೆ ಸೋಮವಾರಪೇಟೆ ತಾಲೂಕು ಕುಂಬಾರಗಡಿಗೆ ಗ್ರಾಮ 10ನೇ ತರಗತಿ ಪಾಸ್ ಆಗಿದ್ದಳು ಎಂದು ಬಾಲಕಿ ಮೀನಾ ಖುಷಿಯಲ್ಲಿದ್ದಳು. ಆದರೆ ಆ ಕುಷಿ ಬಹಳ ಸಮಯ ಇರಲಿಲ್ಲ. ಆರೋಪಿ ಪ್ರಕಾಶ್ ಜೊತೆ ಮೀನಾಳ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅದು ಮುರಿದು ಬಿದ್ದಿತ್ತು. ಇದೇ ಕೋಪದಲ್ಲಿ ಮೀನಾಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿ ರುಂಡವನ್ನು ಬೇರ್ಪಡಿಸಿ ಕಾಡಿನತ್ತ ಎಸ್ಕೆಪ್ ಆಗಿದ್ದನು. ಇದೀಗ ಎರಡು ದಿನಗಳ ಬಳಿಕ ಪ್ರಕಶ್ ಪೊಲೀಸರ ಬಲೆಗೆ ಬಿದಿದ್ದಾನೆ. ಇದನ್ನೂ ಓದಿ: ಮುಂದಿನ 6 ದಿನಗಳ ಕಾಲ ರಾಜ್ಯಕ್ಕೆ ಮಳೆಯ ಮುನ್ಸೂಚನೆ

