RCB : ಈ ಸಲ ಕಪ್ ನಮ್ದೇ ಎನ್ನುವ ಅಭಿಮಾನಿಗಳ ಕನಸು ನನಸಾಗಿದೆ. ಕೋಟಿ ಕೋಟಿ ಅಭಿಮಾನಿಗಳ ಹರಕೆ ಫಲಿಸಿದೆ. 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರೋಮಾಂಚಕ ಪಂದ್ಯದಲ್ಲಿ ಗೆಲ್ಲಲು 192 ರನ್ ಗಳ ಸವಾಲಿನ ಗುರಿ ಪಡೆದ ಶ್ರೇಯಸ್ ಅಯ್ಯರ್ ಪಡೆ ನಿಗದಿತ ಓವರ್ ಗಳು ಮುಗಿದಾಗ 7 ವಿಕೆಟ್ ಕಳೆದುಕೊಂಡು 184 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
| ಸಂಕ್ಷಿಪ್ತ ಸ್ಕೋರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು : 20 ಓವರ್ ಗಳಲ್ಲಿ 190/9, ಕೊಹ್ಲಿ 43, ರಜತ್ ಪಾಟೀದಾರ್ 26, ಲಿವಿಂಗ್ ಸ್ಟನ್ 25, ಮಾಯಾಂಕ್ ಅಗರ್ವಾಲ್ 24, ಜಿತೇಶ್ ಶರ್ಮಾ 24, ಅರ್ಶದೀಪ್ ಸಿಂಗ್ 40ಕ್ಕೆ 3, ಕೈಲ್ ಜಾಮಿಸನ್ 48ಕ್ಕೆ 3, ಪಂಜಾಬ್ ಕಿಂಗ್ಸ್ : 20 ಓವರ್ ಗಳಲ್ಲಿ 184/7, ಶ್ ಇಂಗ್ಲಿಸ್ 39, ಪ್ರಭಾ ಸಿಮ್ರಾನ್ ಸಿಂಗ್ 26, ಪ್ರಿಯಾಂಶ್ ಆರ್ಯ 24, ಕೃನಾಲ್ ಪಾಂಡ್ಯ 17ಕ್ಕೆ 2 |
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್ ಸಿಬಿಗೆ ಫಿಲ್ ಸಾಲ್ಟ್ ಅವರು ಭರ್ಜರಿ ಆರಂಭ ಒದಗಿಸಿದರು. ಅರ್ಶದೀಪ್ ಸಿಂಗ್ ಎಸೆದ ಮೊದಲ ಓವರ್ ನಲ್ಲೇ ಒಂದು ಬೌಂಡರಿ ಮತ್ತು ಮತ್ತೊಂದು ಸಿಕ್ಸರ್ ಸಿಡಿಸಿದ ಸಾಲ್ಟ್ 13 ರನ್ ಬಾರಿಸಿದರು. ಆದರೆ ಈ ಆರ್ಭಟ ಹೆಚ್ಚು ಹೊತ್ತು ಇರಲಿಲ್ಲ. 2ನೇ ಓವರ್ ನ 4ನೇ ಎಸೆತದಲ್ಲೇ ಫಿಲ್ ಸಾಲ್ಟ್ ಅವರ ವಿಕೆಟ್ ಗಳಿಸುವಲ್ಲಿ ಜಾಮಿಸನ್ ಯಶಸ್ವಿಯಾದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್ ಸಿಬಿಗೆ ಫಿಲ್ ಸಾಲ್ಟ್ ಅವರು ಭರ್ಜರಿ ಆರಂಭ ಒದಗಿಸಿದರು. ಅರ್ಶದೀಪ್ ಸಿಂಗ್ ಎಸೆದ ಮೊದಲ ಓವರ್ ನಲ್ಲೇ ಒಂದು ಬೌಂಡರಿ ಮತ್ತು ಮತ್ತೊಂದು ಸಿಕ್ಸರ್ ಸಿಡಿಸಿದ ಸಾಲ್ಟ್ 13 ರನ್ ಬಾರಿಸಿದರು. ಆದರೆ ಈ ಆರ್ಭಟ ಹೆಚ್ಚು ಹೊತ್ತು ಇರಲಿಲ್ಲ. 2ನೇ ಓವರ್ ನ 4ನೇ ಎಸೆತದಲ್ಲೇ ಫಿಲ್ ಸಾಲ್ಟ್ ಅವರ ವಿಕೆಟ್ ಗಳಿಸುವಲ್ಲಿ ಜಾಮಿಸನ್ ಯಶಸ್ವಿಯಾದರು.
ಇದಾದ ಬಳಿಕ ವಿರಾಟ್ ಕೊಹ್ಲಿ ಅವರನ್ನು ಸೇರಿಕೊಂಡ ಮಾಯಾಂಕ್ ಅಗರ್ವಾಲ್ ಅವರು ಪವರ್ ಪ್ಲೇಯನ್ನು ಬಹಳ ಜಾಣ್ಮೆಯಿಂದ ನಿಭಾಯಿಸಿದರು. ಹೀಗಾಗಿ 6 ಓವರ್ ಗಳು ಮುಗಿದಾಗ ಆರ್ ಸಿಬಿಗೆ 55 ರನ್ ಗಳು ಹರಿದು ಬಂದಿದ್ದವು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮಾಯಾಂಕ್ ಅಗರ್ವಾಲ್ ಅವರನ್ನು ದಿಕ್ಕು ತಪ್ಪಿಸಿದ್ದು ಯುಜುವೇಂದ್ರ ಚಹಲ್. 18 ಎಸೆತದಲ್ಲಿ 24 ರನ್ ಗಳಿಸಿದ್ದ ಮಾಯಾಂಕ್ ಅವರು ಲೆಗ್ ಸ್ಟಂಪ್ ಮೇಲಿದ್ದ ಶಾರ್ಟ್ ಪಿಚ್ ಬಾಲನ್ನು ತಪ್ಪಾಗಿ ಆಡಿ ಅರ್ಶದೀಪ್ ಗೆ ಕ್ಯಾಚಿತ್ತು ಔಟಾದರು.
ಇಲ್ಲಿಂದ ಬಳಿಕ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟೀದಾರ್ ಅವರು ಭರ್ಜರಿ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಜೊತೆಗೆ ಉತ್ತಮ ಸ್ಕೋರ್ ಬೋರ್ಡನ್ನು ಶತಕದತ್ತ ಕೊಂಡೊಯ್ಯುತ್ತಿದ್ದರು. ಈ ಹಂತದಲ್ಲಿ 16 ಎಸೆತಗಳಿಂದ 26 ರನ್ ಗಳಿಸಿದ್ದ ಆರ್ ಸಿಬಿ ನಾಯಕನನ್ನು ಜಾಮಿಸನ್ ಅವರು ಎಲ್ ಬಿಡಬ್ಲ್ಯೂ ಬಲೆಗೆ ಕೆಡವಿದರು
ಒಂದೆಡೆ ವಿಕೆಟ್ ಗಳು ಬೀಳುತ್ತಿದ್ದರೂ ಮತ್ತೊಂದೆಡೆ ವಿರಾಟ್ ಕೊಹ್ಲಿ ಅವರು ತಾಳ್ಮೆಯಿಂದ ಆಟವಾಡುತ್ತಿದ್ದರು. ಆದರೆ 15ನೇ ಓವರ್ ನಲ್ಲಿ ತಂಡದ ಮೊತ್ತ 131 ಆಗಿದ್ದಾಗ ಅಜ್ಮತುಲ್ಲಾ ಒಮರಾಜೈ ಅವರು ವಿರಾಟ್ ಕೊಹ್ಲಿ ಅವರನ್ನು ಪೆವಿಲಿಯನ್ ಗೆ ಅಟ್ಟುವಲ್ಲಿ ಯಶಸ್ವಿಯಾಗುತ್ತಾರೆ. ಕೊಹ್ಲಿ ಅವರು 39 ಎಸೆತಗಳಿಂದ 3 ಬೌಂಡರಿಗಳಿದ್ದ 45 ರನ್ ಗಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್ ಸ್ಟನ್(15 ಎಸೆತದಲ್ಲಿ 25 ರನ್), ಜಿತೇಶ್ ಶರ್ಮಾ(10 ಎಸೆತದಲ್ಲಿ 25 ರನ್) ಮತ್ತು ರೊಮಾರಿಯೋ ಶೆಫರ್ಡ್(9 ಎಸೆತದಲ್ಲಿ 17) ತಕ್ಕ ಮಟ್ಟಿಗೆ ಉತ್ತಮವಾಗಿಯೇ ಬ್ಯಾಟ್ ಬೀಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಜಿತೇಶ್ ಶರ್ಮಾ ಅವರನ್ನು ಕರ್ನಾಟಕದ ಮಧ್ಯಮ ವೇಗಿ ವೈಶಾಖ್ ವಿಜಯ್ ಕುಮಾರ್ ಅವರು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಆರ್ ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕುತ್ತಾರೆ. ಅಂತಿಮ ಓವರ್ ನಲ್ಲಿ ಅರ್ಶದೀಪ್ ಸಿಂಗ್ ಅವರು 3 ವಿಕೆಟ್ ಗಳಿಸಿದ್ದರಿಂದ ತಂಡದ ಮೊತ್ತ 200ರ ಗಡಿದಾಟಿಸುವ ಆರ್ ಸಿಬಿ ಉದ್ದೇಶಕ್ಕೆ ತಣ್ಣೀರೆರಚುತ್ತಾರೆ. ಹೀಗಾಗಿ ಅಂತಿಮವಾಗಿ ಆರ್ ಸಿಬಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೇ ಶಕ್ತವಾಗುತ್ತದೆ.

